Sunday, March 27, 2011

ಸರ್ ಎಂ.ವಿಶ್ವೇಶ್ವರಯ್ಯ(vishweshwaraiah) : ವಿಶ್ವ ಮಾನ್ಯ , ಆದರ್ಶ ವ್ಯಕ್ತಿ ಮತ್ತು ದಕ್ಷ ಇಂಜಿನಿಯರ್


ನಾನು ಪ್ರಾಥಮಿಕ ಶಾಲೆಯಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ  ಪುಸ್ತಕದಲ್ಲಿ ಓದಿದ್ದರೂ , ಬೆಳೆದಂತೆ ಇವರ ಸಾಧನೆ ಬಗ್ಗೆ ತಿಳಿದು  ಬೆರಗುಗೊಂಡೆ .

ಇತ್ತೀಚೆ  ಜನವರಿಯಲ್ಲಿ ಮೋಕ್ಷಗುಂಡಮ್  ವಿಶ್ವೇಶ್ವರಯ್ಯ ಪುಸ್ತಕವನ್ನು (ಲೇಖಕ: ವಿ ಎಸ್.ನಾರಾಯಣರಾವ್ ), ಬೆಂಗಳೂರಿನಲ್ಲಿ  ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಂಡೆ ಮತ್ತು ಆ ಪುಸ್ತಕವನ್ನು  ಓದಿ  ಮುಗಿಸುವ ಭಾಗ್ಯ ನನ್ನದಾಯ್ತು .

ಅಯ್ಯನವರ ಸಾಧನೆಯು ನಮ್ಮ ಇಂದಿನ ಭ್ರಷ್ಟಾಚಾರ ಹೆಚ್ಚಿರುವ , ದೇಶಾಭಿಮಾನ ಕಡಿಮೆಯಾಗುತ್ತಿರುವ ಈ ದಿನಗಳಲಿ  ನಮ್ಮ  ಪೀಳಿಗೆಗೆ ಮಾದರಿ ..

ಕಿರು ಚಿತ್ರ : (Video)




ವಿಶ್ವೇಶ್ವರಯ್ಯನವರು ಜನಿಸಿದ್ದು ೧೮೬೦ ರ ಆಗಸ್ಟ್ ತಿಂಗಳ ೨೭ ರಂದು , ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಎಂಬ ಗ್ರಾಮದ ಕಣಿವೆನಾರಾಯಣಪುರ ಹೋಬಳಿಯಲ್ಲಿ .

ವಿಶ್ವೇಶ್ವರಯ್ಯನವರು ೧೫ನೆಯ ವಯಸ್ಸಿನವರಾಗಿದ್ದಾಗ, ತಂದೆ ತೀರಿಕೊಂಡರು . ತಾಯಿಯ ಸಹೋದರ ರಾಮಯ್ಯ ನವರ  ಸಹಾಯದಿಂದ ಮತ್ತು  ಸ್ವಂತ ಪರಿಶ್ರಮದಿಂದ ೧೮೮೧ ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು .

ವಿಶ್ವೇಶ್ವರಯ್ಯ ನವರು  ಅತ್ಯಂತ ಪ್ರತಿಭಾನ್ವಿತ ಇಂಜಿನಿಯರ್ ಹಾಗೂ ದಕ್ಷ ಆಡಳಿತಗಾರರೂ ಆಗಿದ್ದರು . ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವುದರಲ್ಲಿ  ಅವರದು ಎತ್ತಿದ ಕೈ . ಅವರ ಕುಶಲತೆ ಪ್ರತಿಭೆಗಳ ಪ್ರಮಾಣವಾಗಿ ನೀರಾವರಿ  ಯೋಜನೆಗಳು , ಬೃಹತ್ ಜಲಾಶಯಗಳು , ರೈಲು ಮಾರ್ಗಗಳು , ಕಾರ್ಖಾನೆಗಳು , ಕೈಗೊರಿಕೊದ್ಯಮಗಳು , ಮೈಸೂರು ವಿಶ್ವವಿದ್ಯಾನಿಲಯ ಹಾಗೂ  ಸಂಘ ಸಂಸ್ಥಗಳು ಭಾರತದಾದ್ಯಂತ ಚಿರಸ್ಥಾಯಿಯಾಗಿ ಉಳಿದಿದೆ . ಪ್ರತಿಭಾನ್ವಿತ  ಇಂಜಿನಿಯರ್  ಒಬ್ಬರು , ದಕ್ಷ  ಆಡಳಿತಗಾರರೂ ಆಗಬಹುದು ಎಂಬುದಕ್ಕೆ ವಿಶ್ವೇಶ್ವರಯ್ಯನವರು ಸಾಕ್ಷ್ಯ ನೀಡಿದ್ದಾರೆ .

ಕೃಷ್ಣ ರಾಜ ಸಾಗರ ಆಣೆಕಟ್ಟು 

ಮಹಾತ್ಮ  ಗಾಂಧಿಯವರ ಸಮಕಾಲೀನ ರಾಗಿದ್ದ ಇವರ  ಮತ್ತು  ಗಾಂಧಿಯವರ ಕೆಲವು ವಿಚಾರಗಳಲ್ಲಿ   ಭಿನ್ನ ಅಭಿಪ್ರಾಯಗಳಿದ್ದರೂ  ಇವರಿಬ್ಬರ ಗುರಿ  ದೇಶ ಅಭಿವೃದ್ಧಿ  ಒಂದೇ ಆಗಿತ್ತು .!

ವಿಶ್ವೇಶ್ವರಯ್ಯನವರು ನಮ್ಮ ಭಾರತ ದೇಶಕ್ಕೆ ಸಲ್ಲಿಸಿರುವ ಸೇವೆ ಅಪಾರ .

ಶಿಸ್ತಿನ ಸಿಪಾಯಿಯಾಗಿದ್ದ ಇವರು ೧೯೧೨ - ೧೯೧೯ ರವರೆಗೆ  ಮೈಸೂರು  ಸಂಸ್ಥಾನದ ದಿವಾನರಾಗಿದ್ದರು .
ಇವರ ಸೇವೆಯನ್ನು  ಮೆಚ್ಚಿ ೧೯೫೫ ರಲ್ಲಿ  ಪ್ರತಿಷ್ಟಿತ  ಭಾರತ ರತ್ನ ಇವರನ್ನು ಹುಡುಕಿಕೊಂಡು ಬಂತು .

ಅವರ ಬಗ್ಗೆ ತಿಳಿಯುತ್ತ ಹೋದಂತೆ ಒಬ್ಬ ವ್ಯಕ್ತಿ ಜೀವಮಾನದಲ್ಲಿ ಇಷ್ಟೊಂದು ಸಾಧಿಸಬಹುದೇ  ಎಂದು  ಅಚ್ಚರಿಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ..

The Knight Commander of The Indian Empire medal
ಪ್ರತಿಷ್ಟಿತ ಭಾರತ  ರತ್ನ ಪದಕ  

ದೀರ್ಘ ಕಾಲ ಸಾರ್ಥಕ ಬಾಳ್ವೆ ಬಾಳಿ ತಮ್ಮ ೧೦೨ನೆಯ ವಯಸ್ಸಿನಲ್ಲಿ ನಿಧನರಾದರು. . !

2 comments:

Nirmalatm said...

Very knowledgeable post. Video has covered too well.

Jnaneshwara said...

Thanks Nirmala,for your encouraging comments.