Monday, February 22, 2010

Kannadada Kelavu prasiddha Vyaktigalu ಕನ್ನಡದ ಕೆಲವು ಪ್ರಸಿದ್ಧ ವ್ಯಕ್ತಿಗಳು


ನನಗೆ  ಕಾಲೇಜ್ ನಲ್ಲಿ PU ಓದುತ್ತಿದ್ದ ದಿನಗಳಿಂದ  ಸಾಹಿತಿಗಳನ್ನು , ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಮಾಡುವ ,ಬರವಣಿಗೆಯಲ್ಲಿ ತೊಡಗಿಕೊಳ್ಳುವ , ಪದ್ಯ, ಲೇಖನಗಳನ್ನು ಬರೆದು ಪತ್ರಿಕೆ ಗಳಿಗೆ ಪ್ರಕಟಿಸುವ ಹವ್ಯಾಸ ಶುರು ಆಯಿತು .ಅವರಲ್ಲಿ ಹಲವಾರು ಸಾಹಿತಿಗಳನ್ನು , ಕನ್ನಡದ  ಪ್ರಸಿದ್ಧ ಸಾಹಿತಿಗಳನ್ನು , ವ್ಯಕ್ತಿಗಳನ್ನು ನನ್ನ ಊರಾದ ಶಿವಮೊಗ್ಗ (ಮಲೆನಾಡಿನ ಹೆಬ್ಬಾಗಿಲು ) ದಲ್ಲಿ ಭೇಟಿ ಮಾಡುವ ಅವಕಾಶ ದೊರಕಿ ಅವರಿಂದ ಹಸ್ತಾಕ್ಷರ ಪಡೆಯುತ್ತಿದ್ದೆ .

When I was in my native Shivamogga ,I had a hobby of writing articles,taking autographs from famous personalities,publishing my poems and articles in local news papers.I am lucky to get autographs from these famous personalites of karnataka

.ಡಾ.ಎಂ. ಚಿದಾನಂದಮೂರ್ತಿ (Dr.M.Chidananda Murthy)




ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರ "ಹೊಸತು
 ಹೊಸತು" ಎಂಬ ಕೃತಿಗೆ ೧೯೯೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಚಿದಾನಂದಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಹಿರೋಕೋಗಲೂರು ಎಂಬ ಗ್ರಾಮದಲ್ಲಿ ೧೯೩೧ರ ಮೇ ೧೦ ರಂದು ಜನಿಸಿದರು. ಎಮ್.ಎ. ಪದವಿ ಹಾಗು ಪಿ.ಎಚ್.ಡಿ ಪದವಿಗಳನ್ನು ಸಂಪಾದಿಸಿ ಮೊದಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಹಿಡಿದವರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಸ್ವಇಚ್ಛೆಯಿಂದ ನಿವೃತ್ತರಾದರು. ಕೆಲ ಕಾಲ ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು.

ಚಿದಾನಂದಮೂರ್ತಿಯವರು ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಶೂನ್ಯಸಂಪಾದನೆಯನ್ನು ಕುರಿತು, ಭಾಷಾವಿಜ್ಞಾನದ ಮೂಲತತ್ವಗಳು, ಸಂಶೋಧನ ತರಂಗ, ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ, ಪೂರ್ಣ ಸೂರ್ಯಗ್ರಹಣ, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಗ್ರಾಮೀಣ. "ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ" ಈ ಗ್ರಂಥವು ಒಂಬತ್ತು ಭಾಷೆಗಳಿಗೆ ಅನುವಾದವಾಗಿದೆ.

ಚಿದಾನಂದಮೂರ್ತಿಯವರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹಾಗು ಇನ್ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವರ ಆರು ಕೃತಿಗಳು ಬಹುಮಾನಿತವಾಗಿವೆ. ಐವತ್ತಕ್ಕು ಹೆಚ್ಚು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ನಿಘಂಟು ಸಂಪಾದಕ ಸಮಿತಿಯ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಚಳುವಳಿ ಅಥವಾ ವಿಷಯಗಳಲ್ಲಿ ಹೋರಾಟಕ್ಕಿಳಿದಿದ್ದಾರೆ ಹಾಗು ತಮ್ಮ ಅಭಿಪ್ರಾಯಗಳನ್ನು ನಿರ್ದಾಕ್ಷಿಣ್ಯವಾಗಿ ನೀಡುತ್ತಿರುತ್ತಾರೆ.


.  ಕೆ.ವಿ.ಸುಬ್ಬಣ್ಣ (K.V.Subbanna) :






ಕೆ.ವಿ.ಸುಬ್ಬಣ್ಣನವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡುವಿನಲ್ಲಿ ಸ್ಥಾಪಿಸಿದರು.


೩ . ದೊಡ್ಡರಂಗೇಗೌಡ (Doddarange Gowda)




ದೊಡ್ಡರಂಗೇಗೌಡ - ಕನ್ನಡದ ಕವಿಗಳಲ್ಲೊಬ್ಬರು ಮತ್ತು ಚಿತ್ರಸಾಹಿತಿಗಳಲ್ಲೊಬ್ಬರು.

ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ೧೯೪೫ರಲ್ಲಿ ಜನಿಸಿದರು.


ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಕನ್ನಡದಲ್ಲಿ ನವೋದಯ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದರು. ಇವರ ಈ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಚಲನಚಿತ್ರಗಳು

   * ರಂಗನಾಯಕಿ ,ಪರಸಂಗದ ಗೆಂಡೆತಿಮ್ಮ,ಆಲೆಮನೆ ,ಅನುಪಮ ,ಅರುಣರಾಗ , ಮುದುಡಿದ ತಾವರೆ ಅರಳಿತು , ಏಳು ಸುತ್ತಿನ ಕೋಟೆ ,ಅಶ್ವಮೇಧ ,ದಯಗೀತೆ
    * ಭೂಲೋಕದಲ್ಲಿ ಯಮರಾಜ ,ಜನುಮದ ಜೋಡಿ ,ಕುರುಬನ ರಾಣಿ ,ರಮ್ಯ ಚೈತ್ರಕಾಲ,ತಂದೆಗೆ ತಕ್ಕ ಮಗ,

ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಭಾವಗೀತೆ ಆಲ್ಬಂಗಳು
    * ಮಾವು-ಬೇವು , ಭೂಮಿ-ಬಾನು , ಪ್ರಾಯ ಮೂಡಿತು

೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.


೪. ಬಿ.ಕೆ.ಸುಮಿತ್ರಾ (B.K.Sumitra)





ಕನ್ನಡ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ ಬಿ.ಕೆ.ಸುಮಿತ್ರಾ ಒಬ್ಬರು.ಸಂಗೀತದ ಎಲ್ಲ ಪ್ರಕಾರಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.ಬಿ.ಕೆ.ಸುಮಿತ್ರಾ ಹುಟ್ಟಿದ್ದು ಜುಲೈ ೧,೧೯೪೬ ರಂದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.ತಂದೆ ಪಟೇಲ್ ಕೃಷ್ಣಯ್ಯ,ತಾಯಿ ಗಂಗಮ್ಮ.ಓದಿದ್ದು ಬಿಎಸ್‌ಸಿ,ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ.ಕಾಲೇಜಿನಲ್ಲಿ ಓದುತ್ತಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಗೀತೆಗಳನ್ನು ಕೇಳಿ ಸಂಗೀತಾಭ್ಯಾಸ ಶುರು.ಜಾನಪದಗೀತೆ,ಭಕ್ತಿಗೀತೆ,ಭಾವಗೀತೆ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.ಮುಂದಿನ ದಿನಗಳಲ್ಲಿ ಕುವೆಂಪು,ದ.ರಾ.ಬೇಂದ್ರೆ,ಜಿ.ಎಸ್.ಶಿವರುದ್ರಪ್ಪ...ಮೊದಲಾದ ಕವಿಗಳ ಕವಿತೆಗಳನ್ನು ಆಕಾಶವಾಣಿ,ದೂರದರ್ಶನ,ಧ್ವನಿಸುರುಳಿ,ಸಿ.ಡಿ.ಗಳಿಗಾಗಿ ಹಾಡಿದರು.ದೇಶ-ವಿದೇಶಗಳಲ್ಲಿ ಅನೇಕ ಕನ್ನಡಕೂಟಗಳಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.

ಜಿ.ಕೆ.ವೆಂಕಟೇಶ್‌ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಿಂದ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಹೆಚ್.ಎಂ.ವಿ.,ಸಿ.ಬಿ.ಎಸ್.,ಸಂಗೀತ.,ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ ಹಾಡಿದ್ದಾರೆ.ಉದುಪಿಯ ಕೃಷ್ಣ,ಧರ್ಮಸ್ಥಳದ ಮಂಜುನಾಥ,ಎಡೆಯೂರು ಸಿದ್ಧಲಿಂಗೇಶ್ವರ..ಮುಂತಾದ ಭಕ್ತಿಗೀತೆಗಳನ್ನು ಹಾಡಿದ್ದಾರೆ.ಪತಿ ಸುಧಾಕರ್.ಮಗಳು ಸೌಮ್ಯ ಖ್ಯಾತ ಬಾಲಿವುಡ್ ಗಾಯಕಿ.ಮಗ ಸುನೀಲ್‌ರಾವ್ ಕನ್ನಡದ ಉದಯೋನ್ಮುಖ ಚಿತ್ರನಟ.

    * ಲಾವಣ್ಯ ಲೇಖಕರ ಬಳಗದಿಂದ ಗಾನಕೋಗಿಲೆ ಪ್ರಶಸ್ತಿ.
    * ಕೆಂಪೇಗೌಡ ಪ್ರಶಸ್ತಿ.
    * ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
    * ರಾಜ್ಯೋತ್ಸವ ಪ್ರಶಸ್ತಿ.

೫.ಮೈಸೂರು ಅನಂತಸ್ವಾಮಿ  (Mysore Anantaswamy) :






ಅನಂತಸ್ವಾಮಿ ಹುಟ್ಟಿದ್ದು ಪ್ರಸಿದ್ಧ ಸಂಗೀತಗಾರ ಚಿಕ್ಕ ರಾಮರಾವ್ರವರ ಮನೆತನದಲ್ಲಿ, ಮೈಸೂರಿನಲ್ಲಿ.ತಂದೆ ಸುಬ್ಬರಾಯರು,ತಾಯಿ ಕಮಲಮ್ಮ.ಬಾಲ್ಯದಿಂದಲೇ ಸುಗಮ ಸಂಗೀತದಲ್ಲಿ ಅಪಾರ ಆಸಕ್ತಿ.ಆ ಕಾಲದ ಜನಪ್ರಿಯ ಜಾನಪದ ಸಂಗೀತ ಹಾಡುಗಾರ ಪಿ.ಕಾಳಿಂಗರಾವ್‌ರವರ ಕಂಪೆನಿಯಲ್ಲಿ ಕೆಲಕಾಲ ಮ್ಯಾಂಡೋಲಿನ್ ವಾದಕರಾಗಿದ್ದರು.ಅಲ್ಲಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು.ನಂತರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದರು.ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾದರು.ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು.ಈ ಕವನಗಳನ್ನು ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆ-ಮನಗಳಿಗೂ ತಲುಪಿಸಿ,ಆ ಮೂಲಕ ಹೊಸಯುಗಕ್ಕೆ ನಾಂದಿ ಹಾಡಿದರು.ಇವರು ಸಂಯೋಜನೆ ಮಾಡಿರುವ ರಾಗಗಳು ಆಯಾ ಗೀತೆಗಳ ಭಾವಕ್ಕೆ ತಕ್ಕಂತೆ ಸೂಕ್ತವಾಗಿದ್ದು ,ಅವುಗಳ ಅರ್ಥಗಳನ್ನು ಹೆಚ್ಚು ಸಮರ್ಥವಾಗಿ ಹೊರಚೆಲ್ಲುತ್ತವೆ. ಇವರ ಸಂಗೀತ ನಿರ್ದೇಶನ ಮತ್ತು ಗಾಯನದ ಸುಮಾರು ೨೬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.



೬ . ಸು.ರಂ. ಎಕ್ಕುಂಡಿ (S.R.Lakkundi)





ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ.

ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.

ಪುರಸ್ಕಾರ

"ಲೆನಿನ್ನರ ನೆನಪಿಗೆ" ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
"ಮತ್ಸ್ಯಗಂಧಿ" ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
"ಬೆಳ್ಳಕ್ಕಿಗಳು" ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
"ಬಕುಲದ ಹೂವುಗಳು" ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.


 ೬ . ಬಿ.ಸಿ.ರಾಮಚಂದ್ರ ಶರ್ಮ (B.C.Ramachandra sharma)






ಬಿ.ಸಿ.ರಾಮಚಂದ್ರ ಶರ್ಮ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.

 ಬೆಂಗಳೂರು ಮತ್ತು ಮೈಸೂರು‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.


ಪುರಸ್ಕಾರ

    * ಇವರ "ಸಪ್ತಪದಿ" ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
    * "ನೆರಳು" ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
    * "ಸೆರಗಿನ ಕೆಂಡ" ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.
    * ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ ಸಹ ಲಭಿಸಿವೆ.

ಕವನ ಸಂಕಲನಗಳು :
 * ಏಳು ಸುತ್ತಿನ ಕೋಟೆ, ಹೇಸರಗತ್ತೆ ,ಬ್ರಾಹ್ಮಣ ಹುಡುಗ,ಸಪ್ತಪದಿ,ಹೃದಯಗೀತ, ಮಾತು ಮಾಟ

ನಾಟಕಗಳು
 * ಬಾಳಸಂಜೆ ,ನೀಲಿ ಕಾಗದ,ನೆರಳು,ವೈತರಣಿ,ಸೆರಗಿನ ಕೆಂಡ (ರೇಡಿಯೊ ನಾಟಕ)

ಕಥಾ ಸಂಕಲನ
* ಮಂದಾರ ಕುಸುಮ,ಏಳನೆಯ ಜೀವ,ಕತೆಗಾರನ ಕತೆ,

ಅನುವಾದ
* ಈ ಶತಮಾನದ ನೂರು ಇಂಗ್ಲಿಷ್ ಕವನಗಳು , ಮನಃಶಾಸ್ತ್ರ

೭.  ಗೊ. ರು. ಚನ್ನಬಸಪ್ಪ (G.R.Channabasappa)



ಗೊ. ರು. ಚನ್ನಬಸಪ್ಪ

ಕಾವ್ಯನಾಮ :ಗೊರುಚ
ಜನನ :೧೮ ಮೇ ೧೯೩೦   
ತಂದೆ :ರುದ್ರಪ್ಪಗೌಡ
ತಾಯಿ:ಅಕ್ಕಮ್ಮ
ಜನ್ಮ ಸ್ಥಳ :ಗೊಂಡೇದಹಳ್ಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು.

೧೯೪೮ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಸಿಕೊಂಡರು.
ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣವನ್ನು ಕುರಿತು ತರಬೇತಿ ಗೊರುಚರವರು ಪಡೆದಿದ್ದಾರೆ.
ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ಕಸಾಪದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ೧೫೦ಕ್ಕೂ ಹೆಚ್ಚಿನ ಗ್ರಂಥಗಳ ಪ್ರಕಟಣೆಗೆ ಕಾರಣರಾದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ವಾಟರ್ಸ್ ಕಮೀಷನರಾಗಿದ್ದರು.

ಸಾಹಿತ್ಯಕೃತಿಗಳು :

ಸಣ್ಣಕಥೆಗಳು:
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ, ಹಿಂಡು ಬೆದರ್ ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು

ಪ್ರಬಂಧ, ವಿಮರ್ಶಾ ಗ್ರಂಥಗಳು:
ಕರ್ನಾಟಕ ಜನಪದಕಲೆಗಳು

ಪ್ರಶಸ್ತಿ, ಪುರಸ್ಕಾರ, ಬಿರುದು:

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

೮. ಸಾ.ಶಿ. ಮರುಳಯ್ಯ (S.H.Marulasiddaiah) :


 

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.

ಜನಾಮ/ಪೂರ್ಣನಾಮ : ಸಾಸಲು ಶಿವರುದ್ರಯ್ಯ ಮರುಳಯ್ಯ
ಜನನ : ೨೮ ಜನವರಿ ೧೯೩೧
ತಂದೆ :ಶಿವರುದ್ರಯ್ಯ
ತಾಯಿ:ಸಿದ್ಧಮ್ಮ
ಜನ್ಮ ಸ್ಥಳ :ಸಾಸಲು ಗ್ರಾಮ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ
೧೯೫೫ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಆನರ್ಸ್ ಪದವಿ.
ಪದವಿ:೧೯೫೬ ರಲ್ಲಿ ಎಂ. ಎ ಪದವಿ.

  ವೃತ್ತಿ:
ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಬೆಂಗಳೂರು ವಿ.ವಿ. ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದಿದ್ದಾರೆ.

೧೯೭೯- ೮೩ರವರೆಗೂ ವಿಶ್ವಕೋಶದ ಪ್ರಧಾನ ಸಂಪಾದಕರಾಗಿದ್ದರು.
೧೯೮೯- ೯೦ರಲ್ಲಿ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.
೧೯೯೫-೯೮ರಲ್ಲಿ ಸಾಹಿತ್ಯಾ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಸಾಹಿತ್ಯಕೃತಿಗಳು :
ಸಣ್ಣಕಥೆಗಳು:
ಶಿವತಾಂಡವ, ವಿಪರ್ಯಾಸ, ಘೋಷವತಿ, ಬೃಂದಾವನಲೀಲೆ, ರಾಸಲೀಲೆ, ರೂಪಸಿ, ಚೈತ್ರ- ಜ್ಯೋತಿ, ಬಾರೋ ಮೈಲಾರಕೆ, ಮರೀ ಬೇಡಿ, ವಿಜಯ ವಾತಾಪಿ, ಶಿವಲೀಲೆ

ಕಥನಕವನಗಳು:ಶ್ರೀ ಮರುಳಸಿದ್ಧೇಶ್ವರ ವಚನವೈಭವ
ಕಾದಂಬರಿ :ನೂಪುರಾಲಾಸ, ಪುರುಷಸಿಂಹ, ಹೇಮಕೂಟ, ಸಾಮರಸ್ಯ ಶಿಲ್ಪ, ಅನುಶೀಲನೆ.
ಕವನ ಸಂಕಲನಗಳು :ಕೆಂಗನ ಕಲ್ಲು, ಮನಿಷಾ, ನನ್ನ ಕವನಗಳು, ಸುರಭಿ
ವಿಮರ್ಶೆ, ಪ್ರಬಂಧಗಳು: ಭಾಸನ ಮಕ್ಕಳು, ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ.
ಜೀವನ ಚರಿತ್ರೆ : ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು.   
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೭೧ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಎಂಬ ಕೃತಿಗೆ ಪಿ. ಎಚ್. ಡಿ ಪದವಿ ಪಡೆದರು.

ಕೆಂಗನ ಕಲ್ಲು ಕವನ ಸಂಕಲನಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂದಿದೆ.
ಭಾಸನ ಮಕ್ಕಳು ಎಂಬ ವಿಮರ್ಶೆಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಬಂದಿದೆ.


೯ . ಸುಮತೀಂದ್ರ ನಾಡಿಗ (sumateendra Nadig):




ಇವರು ಕನ್ನಡದ ಲೇಖಕರು ಹಾಗು ಖ್ಯಾತ ವಿಮರ್ಶಕರು

ಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂಧ್ರದ ೨೦೦೬ನೇ ಸಾಲಿನ ನಿರಂಜನ ಪ್ರಶಸ್ತಿ ದೊರಕಿದೆ .

Monday, February 01, 2010

kannada jnanapeetha prashasti vijetaru

ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರು

The Jnanpith Award is the highest literary award in India . The name of the award is taken from  sanskrit  jnāna-pīṭha = knowledge-seat

ಇಲ್ಲಿಯವರೆಗೆ ನಮ್ಮ ಕನ್ನಡಿಗರು , ಭಾರತದಲ್ಲೇ ಅಧಿಕ ಅಂದರೆ  8 ಬಾರಿ  ಜ್ಞಾನಪೀಠ  ಪ್ರಶಸ್ತಿಯನ್ನು  ಗಳಿಸಿದ್ದಾರೆ:





೧.ಕೆ .ವಿ ಪುಟ್ಟಪ್ಪ (Kuppalli venkatappa puttappa)  (Kuvempu) - ಶ್ರೀ  ರಾಮಾಯಣ  ದರ್ಶನಂ ೧೯೬೭ (1967)
೨.ದ.ರಾ .ಬೇಂದ್ರೆ ನಾಕುತಂತಿ  (Naku Thanthi) (Four Strings)  -೧೯೭೩ (1973)
೩.ಕೆ .ಶಿವರಾಮ ಕಾರಂತ (ಮೂಕಜ್ಜಿಯ  ಕನಸುಗಳು ) (Mookajjis dreams) - ೧೯೭೭ -(1977)
೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩ - 1983
೫.ವಿ.ಕೃ.ಗೋಕಾಕ್ . (Vinayaka Krishna Gokak) (ಭಾರತ ಸಿಧು ರಶ್ಮಿ ಗೆ ) ೧೯೯೦ (1990)
೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪) 
೭. ಗಿರೀಶ್ ಕಾರ್ನಾಡ್ . (for his contributions to modern Indian drama) - ೧೯೯೮ (1998)
8. ಚಂದ್ರಶೇಖರ ಕಂಬಾರ (Chandrashekahara Kambara) -2010

ವಿಜೇತರ  ಕಿರು ಪರಿಚಯ : 
------------------------------

೧. ಕೆ .ವಿ ಪುಟ್ಟಪ್ಪ (Kuppalli Venkatappagowda Puttappa (Kuvempu) - ಶ್ರೀ  ರಾಮಾಯಣ  ದರ್ಶನಂ ೧೯೬೭ (1967) :




  

ಶ್ರೀ ಪುಟ್ಟಪ್ಪನವರು
ಕಾವ್ಯನಾಮ:     ಕುವೆಂಪು
ಜನನ: ೧೯೦೪*
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ವೃತ್ತಿ:     ಲೇಖಕ, ಪ್ರಾಧ್ಯಾಪಕ, ಕುಲಪತಿ*
ಸಾಹಿತ್ಯದ ವಿಧ(ಗಳು):     ಕಥೆ, ಕವನ, ಕಾದಂಬರಿ
ವಿಷಯಗಳು:     ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಶೈಲಿ:     ಬಂಡಾಯ, ನವೋದಯ   
ಪ್ರಭಾವಗಳು:     ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ

ರಾಮಾಯಣ ದರ್ಶನಂ : 

ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.

http://www.youtube.com/watch?v=f63bksTjzTA

೨ .ದ.ರಾ .ಬೇಂದ್ರೆ -ನಾಕುತಂತಿ  (Naku Thanthi) (Four Strings)  -೧೯೭೩ (1973) 

Dattatreya Ramachandra Bendre ದತ್ತಾತ್ರೇಯ ರಾಮಚಂದ್ರ ಬೇಂದ್ರೆ (January 31, 1896 - 21 October 1981) was amongst the most famous of kannada poets of the navodaya period Praised as varakavi, literally 'gifted poet'. ಜ್ಞಾನಪೀಠ ಪಡೆದ ೨ ನೆಯ ಕನ್ನಡಿಗ .ಅವರು ಅಂಬಿಕಾತನಯದತ್ತ ಅನ್ನುವ ಹೆಸರಿಂದ ಕೂಡ ಬರೆದಿದ್ದಾರೆ.  .ಭಾರತ ಸರ್ಕಾರದಿಂದ ಅವರಿಗೆ ಪದ್ಮ  ಶ್ರೀ ಪ್ರಶಸ್ತಿ ಕೂಡ ದೊರಕಿತ್ತು .




೩. ಕೆ .ಶಿವರಾಮ ಕಾರಂತ (ಮೂಕಜ್ಜಿಯ  ಕನಸುಗಳು ) (Mookajjis dreams) - ೧೯೭೭ -(1977)





Kota Shivaram Karanth (October 10, 1902 - December 9, 1997) was a major Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been finest novelist-activist since independence" by Ramachandra Guha. ಜ್ಞಾನಪೀಠ ಪಡೆದ ೩ ನೆ ಕನ್ನಡಿಗ .He is also been adjudged as one of the ten makers of india in last 60 years by CNN-IBN. ಪದ್ಮಭೂಷಣ ಪ್ರಶಸ್ತಿ  ಬಂದರೂ ಅದನ್ನು ತುರ್ತು ಪರಿಸ್ಥಿತಿ ಹೇರಿದ (ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ) ಕಾರಣ  ಪ್ರಶಸ್ತಿಯನ್ನು ಹಿಂತಿರಿಗಿಸಿದ ಧೀಮಂತ ವ್ಯಕ್ತಿ. 

೧೯೯೩ (1993) ರಲ್ಲಿ ಅವರನ್ನು ನಮ್ಮ ಊರಾದ ಶಿವಮೊಗ್ಗದ ಪ್ರಸಿದ್ಧ ಕರ್ನಾಟಕ ಸಂಘದಲ್ಲಿ ಭೇಟಿಯಾಗಿ ಅವರಿಂದ ಹಸ್ತಾಕ್ಷರ ವನ್ನು ಪಡೆದಿದ್ದೆ .ಇದು ನನ್ನ ಸೌಭಾಗ್ಯ ವೆಂದು ಭಾವಿಸುವೆ .


೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩  (1983) :
 





 


Masthi Venkatesha Iyengar (June 6, 1891 - June 6, 1986) was a popular writer in Kannada language. ಕನ್ನಡದಲ್ಲಿ ಜ್ಞಾನಪೀಠ ಪಡೆದವರಲ್ಲಿ  ನಾಲ್ಕನೆಯವರು . He was popularly referred to as ಮಾಸ್ತಿ ಕನ್ನಡದ ಆಸ್ತಿ which means Maasti is Kannada's Treasure. ಅವರು ಸಣ್ಣ ಕಥೆಗಳಿಂದಲೇ ಚಿರಪರಿಚಿತರು . He wrote under the pen name Srinivasa. He was honored with the title Rajasevasakta by then Maharaja of Mysore Nalvadi Krishnaraja Wadeyar.


೫ .ವಿ. ಕೃ ಗೋಕಾಕ್  (Vinayaka Krishna Gokak) (ಭಾರತ ಸಿಂಧು  ರಶ್ಮಿ ಗೆ ) ೧೯೯೦ (1990) 






Vinayaka Krishna Gokak (1909-1992) was a major writer in Kannada language and a scholar of English and Kannada literatures. ೫ ನೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ for his epic ಭಾರತ ಸಿಂಧು ರಶ್ಮಿ . Bharatha Sindhu Rashmi that deals with the vedic age is perhaps the longest epic written in any language in the 20th Century.


೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪) : 


Udupi Rajagopalacharya Ananthamurthy (born December 21, 1932), is a contemporary writer and critic in the Kannada language and is considered as one of the pioneers of the Navya movement. He is well known among Indian authors.


http://www.youtube.com/watch?v=mZZwFmhz22Q

ಜ್ಞಾನಪೀಠ ಪ್ರಶಸ್ತಿ ಪಡೆದ ೬ನೆ ಕನ್ನಡಿಗ . ೧೯೯೮ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ . ಯಾವಾಗಲು  ಸುದ್ದಿಯಲ್ಲಿ ಇರುವ , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದಾರೆ.

೩-೪ ವರ್ಷದ ಕೆಳಗೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಒಂದು ಕಾರ್ಯ ಕ್ರಮದಲ್ಲಿ  ನೋಡಿದ್ದ್ದೆ . ಇವರು ಬಹಳ ಶಿಸ್ತಿನ ಮನುಷ್ಯ .

 ೭. ಗಿರೀಶ್ ಕಾರ್ನಾಡ್ . (for his contributions to modern Indian drama") - ೧೯೯೮ (1998)

 

Girish Raghunath Karnad (born 19 May 1938) is a contemporary writer, playwright, actor and movie director in Kannada language. ಜ್ಞಾನಪೀಠ ಪಡೆದ ೭ನೆ ಕನ್ನಡಿಗ.
For four decades Karnad has been composing plays, often using history and mythology to tackle contemporary issues.His plays has been directed by eminent directors like Ebrahim Alkazi, B. V. Karanth, Alyque Padamsee, Prasanna, Arvind Gaur, Satyadev Dubey, Vijaya Mehta, Shyamanand Jalan and Amal Allana. He is also active in the world of Indian cinema working as an actor, director, and screenwriter, earning numerous awards along the way. ಇವರಿಗೆ ಭಾರತ ಸರಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಬಂದಿದೆ .


http://www.youtube.com/watch?v=-c5TpucaAp4


8.    ಚಂದ್ರಶೇಖರ ಕಂಬಾರ (Chandrashekhara Kambara) :



(ಜನನ : ಜನವರಿ 2, 1937 ) (January 2, 1937)  ಚಂದ್ರಶೇಖರ ಕಂಬಾರ :ಕನ್ನಡದ ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ, ಜಾನಪದ ತಜ್ಞ, ಸಿನಿಮಾ  ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳಗ್ಗಳು.
ಈ ಬಾರಿ ನಮ್ಮದೇ ರಾಜ್ಯ ಬೆಳಗಾವಿಯಲ್ಲಿ,   ರಾಷ್ಟ್ರಪತಿ ಪ್ರಣಬ್ ಮುಖೆರ್ಜೀಯವರಿಂದ ಪಡೆದದ್ದು ಕನ್ನಡಿಗರು ಹೆಮ್ಮೆ  ಪಡುವ ವಿಷಯ ..



(Born on January 2, 1937) is a prominent poet, playwriter, folklorist, film director in Kannada language and the founder-vice-chancellor of Kannada University in Hampi.